ಧರ್ಮೋ ರಕ್ಷತಿ ರಕ್ಷಿತಹ
ಅಶ್ವ ಅಲಂಕೃತ ಸಾರಥಿಸಿದ್ದ ಬಲಿಷ್ಠ ರಥವು ಬರುತಿರಲು
ಬುಜಕೆ ಪಟ್ಟಿ, ಭರಿತ ಬತ್ತಳಿಕೆ, ವಜ್ರಕಿರೀಟವು ಹೊಳೆದಿರಲು
ಸಮರವೀರನು ಆಗಮಿಸುತಿರಲು ವೈರಿಗಳೆದೆಯಲಿ ನರ್ತನ
ಕಹಳೆಯೊಂದಿಗೆ ರಣರಂಗದೊಳು ಪಸರಿಸಿದೆ ಭಯದ ಕಂಪನ
ಎಷ್ಟು ಉಳಿವರೊ, ಅದೆಷ್ಟು ಉರುಳುವರೊ, ಲೆಕ್ಕಿಸಲಾಗದು ಬಹುಶಹ
ದ್ವಜದೊಂದಿಗೆ ಬರುತಿಹನು ಘೋಷಿಸುತ ' ಧರ್ಮೋ ರಕ್ಷತಿ ರಕ್ಷಿತಹ '.
-ಕವಿಹೃದಯ ಅರುಣ
ಕುರುಕ್ಷೇತ್ರದ ರಣರಂಗವು ಸಾದೃಶವಾಯಿತು.
ReplyDelete