Wednesday, November 13, 2013

ಮಧುಮಗಳ ಚಿಂತೆ



ಚಂದದ ಬ್ರಹ್ಮಚಾರಿಗಳ  ರಾಶಿಯ ಸಂತೆ
ಆ ಸಂತೆಯಲಿ ರಾಶಿ-ನಕ್ಷತ್ರಗಳ ಚಿಂತೆ

ಮಿತಿಮೀರಿದ ನನ್ನಿಷ್ಟಗಳ ಮೂಟೆಯ ಬಾರ
ಯಾರು ಬಾರವನೆಲ್ಲ ಹೊತ್ತು ನಡೆಯುವ ಪೋರ

ಅವರು ಇವರು ತವರೆಂಬ ಹಲವು ಮನೆಯುಂಟು 
ಶಾಶ್ವತ ನೆಲೆ ಕೊಡಲಿಹನು ಬಿಗಿದು ಮೂರು ಗಂಟು

ಎಷ್ಟು ಜನರೊಡನೆ ಬೆರೆತರೂ ಏಕಾಂತವಿದೆ ನಂತರ 
ಹೆಜ್ಜೆ ಹೆಜ್ಜೆಗೂ ಜೊತೆಗಿರುವವ ಇಡಿಸುವನು ಕಾಲುಂಗುರ

ಹಣೆಯಲಿ ಯಾರ ಹೆಸರೆಂಬ ಗೊಂದಲಕೆ ಏಕೆ ಮನ ಜಾರಿತೆ
ಗೊಂದಲ ಮರೆಸಿ ನನ್ನಾಗಿಸುವ ಅರಿಶಿನ ಕುಂಕುಮ ಶೋಬಿತೆ


- ಕವಿಹೃದಯ 

No comments:

Post a Comment